ತೀರ ಇತ್ತೀಚಿಗೆ ನನ್ನ ಮನಸ್ಸು ತುಂಬಾನೆ ಕಿರಿ-ಕಿರಿ ಮಾಡ್ತಾ ಇದೆ. ಯಾವುದಕ್ಕೂ ಸರಿಯಾಗಿ ಸ್ಪಂದಿಸೋದೆ ಇಲ್ಲ. ಅದೇನಾಯ್ತೋ ಕಾಣೆ, ಭಯಂಕರ ಆಲಸ್ಯ! ಚೈತನ್ಯನೆ ಇಲ್ಲದೆ ಇರೋ ಹಾಗೆ, ಮನಸ್ಸಲ್ಲಿ ಯಾವೊದೋ ಒಂದು ಗಂಭೀರವಾದ ವಿಚಾರ ಕೊರೆಯುತ್ತಿದೆ. ಅದನ್ನ ಎಷ್ಟೇ ಲಘುವಾಗಿ ಪರಿಗಣಿಸಿದರೂ ಹಲವು ಪ್ರಶ್ನೆಗಳು ಮತ್ತೆ ಮತ್ತೆ ಕೆಣಕಿ ಬರುತ್ತಿವೆ. ಆದ್ರೆ ಯಾವುದಕ್ಕೂ ಸರಿಯಾದ ಸಮಾಧಾನ ಸಿಗ್ತಾನೆ ಇಲ್ಲ. ಈ ಪ್ರಶ್ನೆಗಳು ಮನಸ್ಸನ್ನ ಎಷ್ಟು ಘಾಸಿ ಮಾಡಿವೆ ಅಂತಂದ್ರೆ, ನಾನು ಎಷ್ಟೇ ಪ್ರಯತ್ನಪಟ್ಟರೂ ಮಾನಸಿಕವಾಗಿ ಯಾವುದೇ ತರನಾದ ಧನಾತ್ಮಕ ಲಕ್ಷಣಗಳು ಗೋಚರಿಸುತ್ತಲೇ ಇಲ್ಲ. ಜೀವನದ ಮೇಲೆ ತಾತ್ಸಾರ ಜಾಸ್ತಿ ಆಗುತ್ತಲೇ ಇದೆ.
No comments:
Post a Comment