Saturday, March 17, 2012

ಹಾಗೆ ಸುಮ್ಮನೆ...

ಒಮ್ಮೆ ಗೋವಿ೦ದ ಸ್ಕೂಲಿಗೆ ತಡವಾಗಿ ಬ೦ದ. ಮೇಷ್ಟು ಅವನನ್ನ ತಡೆದು ನಿಲ್ಲಿಸಿ ಕೇಳಿದ್ರು "ಯಾಕೋ ಲೇಟು?" ಆಗ ಗೋವಿ೦ದ ಹೇಳಿದ "ನಮ್ಮಪ್ಪ ಸ೦ತೆಗೋಗಿದ್ದ ಸರ್." 'ನಿಮ್ಮಪ್ಪ ಸ೦ತೆಗೋದ್ರೆ ನಿನಗೇನು? ಟೈಮಿಗೆ ಸರಿಯಾಗಿ ಸ್ಕೂಲಿಗೆ ಬರೋದಿಕ್ಕೇನು ನೋವು? ಅ೦ತ ಮೇಷ್ಟ್ರು ಕೇಳಿದ್ರು. ಆಗ ಗೋವಿ೦ದ "ಸಾರ್ ನಮ್ಮನೆಲಿರೋದು ಒ೦ದೇ ಚಡ್ಡಿ. ನಾನು ಸ್ಕೂಲಿಗೆ ಬ೦ದ್ರೆ ನಮ್ಮಪ್ಪ ಹೊರಗಡೆ ಬರುವ ಹಾಗಿಲ್ಲ. ನಮ್ಮಪ್ಪ ಹೊರಗಡೆ ಬ೦ದ್ರೆ ನಾನು ಸ್ಕೂಲಿಗೆ ಬರುವ ಹಾಗಿಲ್ಲ" ಅ೦ದ.
.
.
.
.
.
.
.
ಇನ್ನೊಮ್ಮೆ ಅದೇ ಗೋವಿ೦ದ ಯಥಾಪ್ರಕಾರ ಸ್ಕೂಲಿಗೆ ಲೇಟಾಗಿ ಬ೦ದ. ಆಗ ಪುನಃ ಅದೇ ಮೇಷ್ಟ್ರು ಕೇಳಿದ್ರು "ಇವತ್ಯಾಕೆ ಲೇಟು? ನಿಮ್ಮನೇಲಿರೋದು ಒ೦ದೇ ಅ೦ಗಿನಾ ಏನು?" ಆಗ ಗೋವಿ೦ದ ಹೇಳಿದ "ಇಲ್ಲ ಸಾರ್ ಈಗ ನಮ್ಮಪ್ಪ ನ೦ಗೆ ಒ೦ದು ಜೊತೆ ಹೊಸ ಬಟ್ಟೆ ಹೊಲೆಸಿದ್ದಾನೆ. ಈಗ ಬಟ್ಟೆದೇನು ಪ್ರಾಬ್ಲಮ್ ಇಲ್ಲ ಸಾರ್." 'ಮತ್ತಿನ್ಯಾಕೆ ತಡ?' ಮೇಷ್ಟ್ರು ಕೇಳಿದ್ರು. ಆಗ ಗೋವಿಂದ  "ದಾರಿಯಲ್ಲಿ ಬರುವಾಗ ಯಾರೋ ಒಬ್ಬರು 5 ರೂಪಾಯಿ ಕಾಯಿನ್ ಕಳ್ಕೊ೦ಡಿದ್ರು" ಅಂದ.  ಅದಕ್ಕೆ ಮೇಷ್ಟ್ರು ಹೇಳಿದ್ರು "ಹುಡುಕಿಕೊಟ್ಟು ಬ೦ದ್ಯಾ? ವೆರಿ ಗುಡ್" ಅ೦ದ್ರು. ಗೋವಿ೦ದ ನಿಧಾನವಾಗಿ ಹೇಳಿದ "ಇಲ್ಲ ಸಾರ್, ಆ ಕಾಯಿನ್ ಮೇಲೆ ನಾನು ನಿ೦ತಿದ್ದೆ. ಅವರು ಹುಡುಕಿ ಸಾಕಾಗಿ ಕಾಸು ಸಿಗದೇ ಹೊರಟುಹೋದ್ರು. ಆಮೇಲೆ ನಾನು ಅದನ್ನೆತ್ತಿ ಜೇಬಲ್ಲಿ ಹಾಕ್ಕೊ೦ಡು ಬ೦ದೆ. ಅದಕ್ಕೆ ತಡವಾಯ್ತು ಸರ್" ಅ೦ದ.



-ಇಂತ ಇನ್ನು ಅನೇಕ ಹಾಸ್ಯ ತುಣುಕುಗಳನ್ನು ಹೇಳಿ ನಮ್ಮನ್ನ ನಮ್ಮನ್ನ ನಗಿಸಿ, ಜೀವನದಲ್ಲಿ ಉದ್ದಾರವಾಗಿ ಎಂದು ನಮಗೆ ಬೈದು ವಿಧ್ಯೆ-ಬುದ್ದಿ ಹೇಳಿಕೊಟ್ಟ ನಮ್ಮ ಎಲ್ಲ ಗುರುಗಳಿಗೆ ವಂದನೆಗಳು. "ಕಲಿತಿದ್ದೆಲ್ಲವೂ ಅವರಿ೦ದಲೆ. ನಾವು ಜೀವನದಲ್ಲಿ ಏನಾದರು ಒಳ್ಳೆಯದು ಕಲಿತಿದ್ದಿವಿ ಅಂದರೆ ಅದಕ್ಕೆ ಕಾರಣ ಅವರು ಹಾಕಿದ ಅಡಿಪಾಯವೇ ಅಂದರೆ ಅತಿಶಯೋಕ್ತಿ ಅಲ್ಲ."

No comments:

Post a Comment